ಮರೀನಾ ಬೀಚ್ಗೆ ಹೋಗುವುದು ನನ್ನ ಮೆಚ್ಚಿನ ಹವ್ಯಾಸಗಳಲ್ಲೊಂದು. ಈಗಿನ ಕಾರ್ಯದೊತ್ತಡಗಳ ನಡುವೆ ಮರಿನಾವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬ ಪ್ರಶ್ನೆ ಕಾಡಿದ್ದು ನಿಜವಾದರೂ, ಹೋಗಲಿ ಮುಂದಿನ ವಾರ ಹೋದರಾಯಿತು ಎಂದು ಸಮಾಧಾನ ಪಟ್ಟುಕೊಂಡಿದ್ದೆ. ಕಳೆದ ವಾರ ನನಗೆ ತಡೆಯಾದದ್ದು ಈ ಓಂ ಶಾಂತಿ ಓಂ. ನನ್ನ ಮಿತ್ರ ...
|
ಅದೊಂದು ಹುಚ್ಚು ನನಗೆ. ನಿರಾಳ ರಾತ್ರಿಗಳಲ್ಲಿ ನೇತ್ರಾವತಿಯ ದಂಡೆಯಲ್ಲೋ, ಕುಮಾರಧಾರೆಯ್ ಪಕ್ಕದಲ್ಲೋ, ಕುಳಿತು ಬೆಳ್ಳಬೆಳ್ಳನೆ ಚಂದಿರನನ್ನು ಕ್ಣ್ತುಂಬಾ ತೊಂಬಿಕೊಳ್ಳೋದು. ಮೊದಲೆಲ್ಲಾ ಅಲ್ಲಿ ಏನೇನೋ ಕನಸುಗಳು ಹುಟ್ಟಿಕೊಳ್ಳುತ್ತಿದ್ದವ...
|
ನೋಡದ ಹುಡುಗಿಗೆ...., ನೀನು ಹೇಗಿದ್ದೀಯೋ ಗೊತ್ತಿಲ್ಲ, ಎಲ್ಲಿದ್ದಿ ಅಂತ ಮಾತ್ರ ಗೊತ್ತು. ನಿನ್ನ ನೋಡೂ ಇಲ್ಲ. ಆದರೆ, ಲೆಕ್ಕವಿಲ್ಲದಷ್ಟು ಬಾರಿ ಮಾತನಾಡಿದ್ದೇನೆ. ಯಾರೇ ನೀನು ಚೆಲುವೆಯ ರವಿಚಂದ್ರನ್ ಥರಾ ಆಗಿದೆ ನನ್ನ ಸ್ಥಿತಿ. ಪ್ರೀತಿಸಬೇಕು ಅಂತ ಬ್ಯಸಿದ್ದೇನೆ. ಹಾಗೆ ಬಯಸುವುದರಲ್ಲಿ ತ್ಪ್ಪೇನಿದೆ ಹೇಳು ?
|
ಕರ್ನಾಟಕದೆಲ್ಲೆಡೆ ಕಳೆದ 200 ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಯೋಗರಾಜ್ ಭಟ್ರ ಮುಂಗಾರು ಮಳೆ ಈಗ ಅತೀ ವಿರಳವೆಂಬಂತೆ ದೇಶದ ಮಹಾನಗರಗಳಲ್ಲಿ ಒಂದಾದ ರಣ ಬಿಸಿಲಿನ ನಗರ ಚೆನ್ನೈಗೂ ಆಗಮಿಸಿ, ಎಲ್ಲಾ ಚಿತ್ರ ರಸಿಕರ, ವಿಶೇಷವಾಗಿ ಕನ್ನಡಿಗರ ಮೈ ಮನಗಳನ್ನು ತಣಿಸಿದೆ.ಚೆನ್ನೈನ ಕ್ಯಾಸಿನೊ ಚಿತ್ರಮಂದಿರಕ್ಕೆ ...
|
ಹೌದಲ್ವಾ? ನನ್ನ ಅಕ್ಕ ಪಕ್ಕದ ಮನೆಯಲ್ಲಿ ನನ್ನ ವಯಸ್ಸಿನ ಹುಡುಗ್ರು ಯುಗಾದಿಯಂದು, ವಿಷು ಕಣಿ ನೋಡಿ ಹೊಸ ಬಟ್ಟೆ ತೊಟ್ಟು ನಲಿದಾಡುವುದಕ್ಕೆ, ಅವರ ಫ್ರೆಂಡ್ಸಿಗೆಲ್ಲಾ ತೋರಿಸೋದಿಕ್ಕೆ ಎಷ್ಟೊಂದು ಸಂಭ್ರಮದಲ್ಲಿದ್ದಾರೆ! ಸಡಗರ, ಪುಳಕ, ಮನಸ್ಸಿನ ತುಂಬಾ ಹೊಸ ಅಂಗಿ ಚಡ್ಡಿಯ ಕನಸು... ಯುಗಾದಿಗೆ ಒಂದು ವಾರ ಇರುವಾಗಲೇ ಅವರ ಕಣ್ಣುಗಳಲ್ಲದೇನು ಹೊಳಪು! ನಾನು ಯೋಚಿಸಿಕೊಳ್ಳುತ್ತೇನೆ... ಈ ಹಬ್ಬ ಅಂದ್ರೇನು? ಬೆಂದ ಅನ್ನಕ್ಕೇ ಒಂದಷ್ಟು ಬೆಲ್ಲ ಹಾಕಿ, ತೆಂಗಿನ ಕಾಯಿ ಇದ್ದರೆ ಅದನ್ನು ಅರೆದು ಹಾಲು ತೆಗೆದು, ಅದನ್ನೂ ಸೇರಿಸಿದರೆ ಒಂದು ಮಧ್ಯಾಹ್ನದೂಟಕ್ಕೆ ಅರ್ಧ ಲೋಟದಲ್ಲಿ ಪಾಯಸ ಎಂಬ ಸಿಹಿ ಪದಾರ್ಥ ತಿಂದರೆ ಅದೇ ಹಬ್ಬವಾಗಿಬಿಡುತ್ತಿತ್ತು ನನಗೆ. ಹೊಸ ಅಂಗಿ-ಚಡ್ಡಿಯ ಬಗ್ಗೆ ನಾನಂತೂ ಕನಸು ಕಂಡದ್ದಿಲ್ಲ, ಕಾಣುವಂತೆಯೂ ಇರಲಿಲ್ಲ.
|
ಕರ್ನಾಟಕದಲ್ಲೀಗ ಚುನಾವಣೆಯ ಸಮಯ. ರಾಜಕೀಯ ಪಕ್ಷಗಳಂತೂ ಕನ್ನಡ ಮನಸುಗಳ ಗಮನ ಸೆಳೆಯಲು ಹೊಗೇನಕಲ್ ಘಟನೆಯನ್ನು ಅಸ್ತ್ರವಾಗಿಸಿಕೊಳ್ಳುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ. ಏನೇ ಆದರೂ ಕರ್ನಾಟಕದ ಹಿತ ಕಾಯಲು ರಾಜಕೀಯ ಪಕ್ಷಗಳಿಗೆ ಇದೊಂದು ಅವಕಾಶ. ಕಪ್ಪು ಕನ್ನಡಕದ ತಮಿಳು ಮುಖ್ಯಮಂತ್ರಿ ಹೇಳಿಕೆಯು ಸಹಜವಾಗಿ ಕನ್ನಡ ಪರ ಸಂಘಟನೆಗಳು ಮತ್ತು ಪಕ್ಷ ಭೇದವಿಲ್ಲದೆ ರಾಜ್ಯದ ರಾಜಕೀಯ ಪಕ್ಷಗಳನ್ನೂ ಬಡಿದೆಬ್ಬಿಸಿವೆ. ಆದರೆ ನಮ್ಮ ಸಂಸದರು ಮಾತ್ರ ಎಚ್ಚೆತ್ತುಕೊಳ್ಳಲು ಸಾಕಷ್ಟು ಕಾಲಾವಕಾಶ ಬೇಕೇನೋ...!
|
ಸಹೊದ್ಯೋಗಿ ನಾಗೇಂದ್ರ ಅವರು ವೀರ್ ಸಾವರ್ಕರ್ ಅವರ ಜನ್ಮ ದಿನ ಮೇ 28ರಂದು ಅವರ ಕುರಿತು ಬರೆದ ಲೇಖನ ಚೆನ್ನಾಗಿದೆ ಆದರೆ ಇಲ್ಲಿ ಹಲವಾರು ಸಂಶಯಗಳು ಮತ್ತು ಅಭಿಪ್ರಾಯಗಳು ಸಾಧಾರಣವಾಗಿ ಗೊಂದಲದ ಗೂಡಾಗಿ ಪರಿಣಮಿಸಿವೆ.ಮೊದಲನೆಯದಾ...
|
ಗಂಡು ಜನ್ಮಕ್ಕೆ ಈ ರೀತಿಯಾಗಿ ಶಾಪ ತಟ್ಟಬಾರದಿತ್ತು. ಇದು ಕೇವಲ ನನ್ನ ಮಾತಲ್ಲ. ಪ್ರತಿ ಜಾತಿಯ ಹಿರಿಯರೂ ಹೇಳುತ್ತಿರುವ ಮಾತಿದು. ಹೆಣ್ಣುಗಳಿಗೆ ಈ ಪ್ರಮಾಣದ ಬೇಡಿಕೆ ಬರುತ್ತದೆಂದು ನಾವು ಎಂದಿಗೂ ಬಹುಶಃ ಊಹಿಸಿರಲಿಲ್ಲವೇನೋ? ಹುಟ್ಟಿದ ಗಂಡಿಗೆ ದೇವರು ಎಲ್ಲೋ ಒಂದು ಹೆಣ್ಣನ್ನು ಸೃಷ್ಟಿಸಿಯೇ ತೀರುತ್ತಾನೆ ಎಂಬ ಮಾತು ...
|
ಅನುವಾದ ಸಾಹಿತ್ಯದಲ್ಲಿ ಓದುವ ಅಸಕ್ತಿ ಹುಟ್ಟಬೇಕು ಎಂದರೆ ಅದು ಎಲ್ಲೊ ನಮ್ಮ ಪಕ್ಕವೇ ನಡೆದ ಘಟನೆಯಂತಿರಬೇಕು. ಆಗಾಗ ಓದುಗನ ಮನಸ್ಸು ತನ್ನ ಸುತ್ತಲಿನ ಪರಿಸರವನ್ನು ಕಲ್ಪಿಸಿಕೊಂಡು ಅಕ್ಷರಗಳ ಲೋಕದಲ್ಲಿ ತನ್ಮಯನಾಗಲು ಪ್ರಯತ್ನಿಸುತ್ತದೆ. ಎಲ್ಲೊ ಕಾಣದ ಊರು ಕೇಳದ ಹೆಸರುಗಳಿಂದ
|
ಮತ್ತೆ ಹಾಳು ರಾಜಕೀಯದ ಬಗ್ಗೆಯೇ ಬರೆಯಲೇಬೇಕಾದ ಸಂದರ್ಭವೊದಗಿದೆ. ಕನ್ನಡ ನಾಡಿನ ಜನರ ಬಾಯಲ್ಲಿ ಇದೀಗ ಬೇರೆಯೇನಾದರೂ ಏನಿದೆ ಮಾತನಾಡಲು..... ರಾಜ್ಯದ ವಿಧಾನಸಭೆಯನ್ನು ವಿಸರ್ಜಿಸುವ ಕಾಲ ಸನ್ನಿಹಿತವಾಗಿದೆ. ಅಧಿಕಾರದ ಸುಖ ಬಿಡಲೊಲ್ಲೆ ಅನ್ನುತ್ತಾ ಮತ್ತೆ ಕಾಂಗ್ರೆಸ್ ಬಾಗಿಲನ್ನು ತಟ್ಟಲು ಹೋದ ಮಣ್ಣಿನ ಮಗನಿಗೆ ...
|
ಆಂಗ್ಲ ಭಾಷೆಯ ಮೇಲೆ ಹಿಡಿತ ಇಲ್ಲದಿದ್ದರೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಕಾರ್ಖಾನೆಗಳಿಂದ ವರ್ಷಂಪ್ರತಿ ಪದವಿ ಹೊತ್ತುಕೊಂಡು ಹೊರಬಿದ್ದ ನಂತರ ಉದ್ಯೋಗವನ್ನು ಹೊಂಚಿಕೊಳ್ಳುವುದು ಸುಲಭಸಾಧ್ಯವಲ್ಲ. ಯಾವುದೇ ಜಾಹೀರಾತು ತೆಗೆದು ನೋಡಿ ಕನ್ನಡ ಮಾತ್ರ ಬಲ್ಲವರಿಗೆ ಆದ್ಯತೆ ಅಂತ ಎಲ್ಲಾದರೂ ಕಾಣಸಿಗುತ್ತದಾ? ಹಾಟ್ ಹೂಟ್ ಅಂತ ಇಂಗ್ಲೀಷಿನಲ್ಲಿ ನಿರರ್ಗಳ ಮಾತಾಡಿದ್ರೋ ನೀವು ಪಾಸ್.
|
ಮಹಾಸಮರ ಆರಂಭವಾಗೇ ಬಿಟ್ಟಿದೆ. ರಾಜಕಾರಣಿಗಳ ಭಂಡ ರಾಜಕೀಯದಲ್ಲಿ ಬಡವಾಗಿದ್ದ ಕರ್ನಾಟಕದ ಜನತೆ ಮತ್ತೊಂದು ಬಾರಿ ಅದೇ ಭಂಡರನ್ನು ಆಯ್ಕೆ ಮಾಡಲು ತಯಾರಾಗಿದ್ದಾರೆ.ದಿನಕ್ಕ...
|
ಈ ಜಗತ್ತಿನಲ್ಲಿ ಹುಟ್ಟಿದ ಮೇಲೆ ಮನುಷ್ಯ ಜೀವಿಯಾಗಿಯೇ ಹುಟ್ಟಬೇಕು. ಆದರೆ ಮನುಷ್ಯ ಜನ್ಮವನ್ನು ಅಷ್ಟು ಸುಲಭದಲ್ಲಿ ಪಡೆಯಲು ಸಾಧ್ಯವಿಲ್ಲ. ಮನುಷ್ಯ ಜನ್ಮವನ್ನು ಪಡೆಯಬೇಕಾದರೆ ಅನೇಕ ಪುಣ್ಯಗಳನ್ನು ಮಾಡಿರಬೇಕು ಎಂದು ಎಷ್ಟೋ ಜನ ಆಧ್ಯಾತ್ಮ ವಿಚಾರವಾದಿಗಳು ಹೇಳಿರುವುದನ್ನು ನಾವು ಕೇಳಿರಬಹುದು. ಮನುಷ್ಯ ಜೀವಿಯಾಗಿ ...
|
ಮನೆಯ ಕಾವಲು ನಾಯಿಇರುವಂತೆಸದಾ ನಿನ್ನ ಕಾವಲುನಾ(ಯಿ) ಇಲ್ಲವೇ?
|
ಈ ಬಾರಿ ಊರಿಗೆ ಹೋಗಿದ್ದಾಗ ಅಮ್ಮ ಏನೋ ಪ್ರೇತಗಳ ಬಗ್ಗೆ ಹೇಳ್ತಾನೆ ಇದ್ರು..ಪ್ರೇತ ಭೂತ ಏನೂ ಇಲ್ಲ ಎಂದು ಅಪ್ಪ ವಾದಿಸಿದರೂ ಅಮ್ಮನ ಪ್ರೇತ ಪಾರಾಯಣ ಮುಂದುವರಿಯುತ್ತಲೇ ಇತ್ತು. ಹೀಗೆ ಮಾತನಾಡುತ್ತಿರುವಾಗ "ಪ್ರೇತಮದುವೆಯ" ವಿಷಯವೂ ಅಮ್ಮನ ಬಾಯಿಂದ ಬಿತ್ತು. ಮದುವೆಯಾಗದೇ ಯಾರಾದರೂ ಸಾವನ್ನಪ್ಪಿದರೆ ಅವರು ಪ್ರೇತಗಳಾದ ...
|